Skip to main content

ಒಂದೊಳ್ಳೆ ಮಾತು


ಮಾತಿಗಿಂತ ಮೌನ ಶಕ್ತಿಯುತ
                ಚಂದ್ರನಗರದ ಅರಸ ಚಂದ್ರಸೇನನ ಏಕೈಕ   ಪುತ್ರಿ ಸುಮತಿ ಸುಂದರಿ ಹಾಗೆ ಬುದ್ಧಿವಂತಳೂ.... ಆಗಿದ್ದಳು. ತನ್ನ ರೂಪ ಹಾಗೂ ಬುದ್ದಿವಂತಿಕೆಯ ಬಗ್ಗೆ ಬಂದ ಮೇಲೆ ಅರಸ ಅವಳ ವಿವಾಹ ಮಾಡಲು ಬಯಸಿದ. ಆದರೆ ರಾಜಕುಮಾರಿ, 'ಅಪ್ಪಾ ನನಗಿಂತ ಬುದ್ಧಿವಂತನಾಗಿರುವ ಯುವಕನ ಜತೆ ಮಾತ್ರ ನಾನು ಮದುವೆಯಾಗುವೆ' ಎಂದು ಹೇಳಿದಳು.

ಅಂತಹ ಯುವಕನನ್ನು ಹುಡುಕುವುದು ಹೇಗೆ. ಎಂದು ಅರಸನಿಗೆ ಚಿಂತೆಯಾಯಿತು. ಅದನ್ನು" ನನಗೆ  ಬಿಡಿ "ಎಂದು ಹೇಳಿದ ಸುಮತಿ ಆಳುಗಳ ಸಹಾಯದಿಂದ ಅರಮನೆಯ ಒಂದು ದೊಡ್ಡ ಮರಕ್ಕೆ ತೂಗುವ ಮಂಚವನ್ನು ಕಟ್ಟಿಸಿದಳು. ಮರುದಿನ ಮುಂಜಾನೆ ಆರಸ, ಮಗಳ ಆದೇಶ ದಂತೆ ತನ್ನ ರಾಜ್ಯದಲ್ಲಿ ಡಂಗೂರ ಸಾರಿಸಿದ."ಯಾರು ರಾಜಕುಮಾರಿ ಹಾಕಿದ ಷರತ್ತನ್ನು  ಗೆಲ್ಲುವರೋ" ಅವರು ರಾಜಕುಮಾರಿಯನ್ನು ವಿವಾಹವಾಗಬಹುದು. ಎಂದು ರಾಜಕುಮಾರಿಯ ರೂಪ ಹಾಗೂ ಬುದ್ದಿ ಹಾಗೂ ಖ್ಯಾತಿ ದೂರದ ವರೆಗೂ ಹಬ್ಬಿತ್ತು
ಹೀಗಾಗಿ ರಾಜಕುಮಾರಿಯನ್ನು ವರಿಸುವುದಕ್ಕಾಗಿ ದೂರದ ಊರುಗಳಿಂದ ರಾಜಕುಮಾರರು ಚಂದ್ರ ನಗರಕ್ಕೆ ಬಂದರು.
ರಾಜಕುಮಾರಿ ಮರಕ್ಕೆ ಕಟ್ಟಿದ ತೂಗುಮಂಚದಿಂದ ನನ್ನನ್ನು ಮುಟ್ಟದೆ ಯಾರು ಕೆಳಗೆ ಇಳಿಸುವರೋ ಆ ಯುವಕನನ್ನು ನಾನು ಮದುವೆಯಾಗುವುದಾಗಿ ಷರತ್ತು ಹೊರಡಿಸಿದಳು. ತಾನು ಬಂದ ರಾಜಕುಮಾರರೆಲ್ಲ ನಾನಾ ರೀತಿಯಿಂದ ಪ್ರಯತ್ನಿಸಿದರೂ ಅವಳನ್ನು ತೂಗುಮಂಚದಿಂದ ಕೆಳಗಿಳಿಸಲು ಸಾಧ್ಯವಾಗಲಿಲ್ಲ. ಅವರೆಲ್ಲಾ ನಿರಾಶರಾಗಿ ಹೊರಟುಹೋದರು. ದಿನಗಳು ಕಳೆದುಹೋದವು . ಅರಸನಿಗೆ ಚಿಂತೆಯಾಯಿತು.ಮಾರನೇ ದಿನ ರಾಜಕುಮಾರಿಯ ಮದುವೆಯ ವಿಷಯ ಕೇಳಿ ಕುರಿಕಾಯುವ ವೇಷದಲ್ಲಿ ರಾಜಕುಮಾರನೊಬ್ಬ ಚಂದ್ರನಗರಕ್ಕೆ ಬಂದ. ಅವನ ಜತೆಯಲ್ಲಿ ಒಂದು ಕುರಿ ಹಾಗೂ ಒಂದು ನಾಯಿ ಇದ್ದವು. ಅವನು ಕುರಿ ಹಾಗೂ

ನಾಯಿಯನ್ನು ರಾಜಕುಮಾರಿ ಕುಳಿತ ಮರದ ಬಳಿಯಲ್ಲಿಯೇ ಇದ್ದ ಇನ್ನೊಂದು ಚಿಕ್ಕ ಮರಕ್ಕೆ ಸ್ವಲ್ಪ ಅಂತರದಲ್ಲಿ ಕಟ್ಟಿದ, ಆಮೇಲೆ ತನ್ನ ಜೋಳಿಗೆಯಿಂದ ಸ್ವಲ್ಪ ಮಾಂಸವನ್ನು ತೆಗೆದು ಕುರಿಯ ಮುಂದೆ ಹಾಕಿದನು. ಆಮೇಲೆ ಸ್ವಲ್ಪ ಹುಲ್ಲನ್ನು ತೆಗೆದು ನಾಯಿಯ ಮುಂದೆ ಹಾಕಿದನು. ರಾಜಕುಮಾರಿ ತುಂಬ ಕುತೂಹಲದಿಂದ ಅದನ್ನು ನೋಡುತ್ತಿದ್ದಳು. ರಾಜಕುಮಾರಿಗೆ ಅವನ ಮೂರ್ಖತನವನ್ನು ಕಂಡು ನಗೆ ಬಂತು.

ಅವಳು, 'ಎಲ್ಲೋ ಮೂರ್ಖ, ಕುರಿ ಮಾಂಸವನ್ನು, ತಿನ್ನುತ್ತವೆಯೇ' ಎಂದು ಕೇಳಿದಳು. ಆದರೆ, ಈ ವೇಷಧಾರಿ ರಾಜಕುಮಾರ ಅವಳು ಹೇಳಿದ್ದನ್ನು ಕೇಳಿಸಿ ಕೊಂಡಿಲ್ಲ ಎಂಬಂತೆ ವರ್ತಿಸಿದನು . ಆಗ ರಾಜಕುಮಾರಿ ಇನಷ್ಟು ಜೋರಾಗಿ ಕೂಗಿದರೂ ಅವನು ತಿರುಗಿ ನೋಡಲಿಲ್ಲ. ರಾಜಕುಮಾರಿಗೆ ಇನ್ನಷ್ಟು ಕೋಪ ಬಂತು. ನಿನಗೇನು ಕಿವುಡೇ? ನಾನು ಹೇಳುತ್ತಿರುವುದು ನಿನಗೆ ಕೇಳಿಸುತ್ತಿಲ್ಲವೇ? ಎಂದಳು. ಆಗಲೂ ಅವನು ಮೌನವಾಗಿಯೇ ಇದ್ದನು. ಆಗ ರಾಜಕುಮಾರಿಗೆ ಕೋಪ ತಡೆದು ಕೊಳ್ಳಲಾಗಲಿಲ್ಲ. ಅವಳು ತೂಗುಮಂಚದಿಂದ ಕೆಳಗಿಳಿದು ಅವನ ಬಳಿಗೆ ಬಂದು ನಾನು ಅಷ್ಟೊತ್ತಿನಿಂದ ಕಿರುಚುತ್ತಿದ್ದೇನೆ. ನಿನಗೆ ಕೇಳಿಸುತ್ತಿಲ್ಲವೇ?' ಎಂದು ಜೋರಾಗಿ ಹೇಳಿದಳು. ಆಗ ಅವನು ಮುಗುಳ್ಳಗುತ್ತ
'ಕೇಳಿಸುತ್ತಿದೆ' ಎಂದ.
ರಾಜಕುಮಾರಿಗೆ ಏನೂ ತೋಚದಾಯಿತು. ಅವಳಿಗೆ ತನ್ನ ತಪ್ಪಿನ ಅರಿವಾಯ್ತು. ಮುಟ್ಟದೆ ಕುರಿ ಕಾಯುವ ವೇಷದಲ್ಲಿದ್ದ ರಾಜಕುಮಾರ ತೂಗು ಮಂಚದಿಂದ ಕೆಳಗೆ ಇಳಿಸಿದ್ದನು.  ತನ್ನ ಷರತ್ತಿನಂತೆ ರಾಜಕುಮಾರಿ ಅವನ ಕೊರಳಿಗೆ ಮಾಲೆ ಹಾಕಬೇಕಾಯಿತು.
ಅನೇಕ ಬಾರಿ ನಾವು ನಮ್ಮ ಬುದ್ದಿವಂತಿಕೆಯನ್ನು ಮಾತುಗಳಲ್ಲಿ ಪ್ರದರ್ಶಿಸುವ ಪ್ರಯತ್ನ ಮಾಡುತ್ತಿರುತ್ತೇವೆ. ಆದರೆ, ಎಲ್ಲಾ ಕಡೆಯೂ ಮಾತಿನಿಂದ ಗೆಲ್ಲಲು ಸಾಧ್ಯವಿಲ್ಲ, ಕೆಲವೊಮ್ಮೆ ಮೌನವಾಗಿರುವುದು ಕೂಡ ಬುದ್ಧಿವಂತಿಕೆ ಆನಿಸಿಕೊಳ್ಳುತ್ತದೆ. ಎಲ್ಲರಿಗಿಂತ ನಮಗೇ ಹೆಚ್ಚು ತಿಳಿದಿದೆ ಎನ್ನುವ ಅಹಂಕಾರವೂ ಕೂಡ ಒಂದಲ್ಲ ಒಂದು ದಿನ ನಮ್ಮ ಸೋಲಿಗೆ ಕಾರಣವಾಗುತ್ತದೆ. ಎಲ್ಲಾ ಸಂದರ್ಭಗಳಲ್ಲಿ ನಾವು ಮಾತನಾಡಿ, ವಾದವನ್ನು ಗೆಲ್ಲುವ ಅವಶ್ಯಕತೆಯಿರುವುದಿಲ್ಲ, ಮೌನದಿಂದಿದ್ದು ಆ ಸಂದರ್ಭವನ್ನು ನಮಗೆ ಅನುಕೂಲಕರವಾಗಿ ತಿರುಗಿಸಿಕೊಳ್ಳಬಹುದು. ಯಾವ ಸಂದರ್ಭದಲ್ಲಿ ಮಾತನಾಡಬೇಕು, ಯಾವಾಗ ಮೌನದಿಂದ ಇರಬೇಕು ಎನ್ನುವ ಸೂಕ್ಷ್ಮ ಪ್ರಜ್ಞೆ ನಮಗಿದ್ದರೆ ಆಯಿತು. ಮಾತನಾಡಬಲ್ಲವರು ಅಗತ್ಯವಿದ್ದಾಗ ಮೌನವಾಗಿರಬಲ್ಲವರು ಜಾಣರಾದರೆ ಅಗತ್ಯವಿದ್ದಾಗ ಮೌನರಾಗಿರಬಲ್ಲರು. ಎಂಥ ಪರಿಸ್ಥಿತಿಯನ್ನೂ ನಿಭಾಯಿಸುವ ಜಾಣ್ಮೆ ಬೆಳೆಸಿಕೊಂಡಿರುತ್ತಾರೆ.

Comments

Popular posts from this blog

ಮನೆಯಿಂದಲೆ ಮಾಡಿ ಕೆಲಸ

 ಉದ್ಯೋಗ ಐಡಿ:20W70-1452100405437J ಸಂಬಳ:(₹) 22500 - 26500 (ಮಾಸಿಕ) ಹುದ್ದೆಗಳ ಸಂಖ್ಯೆ: 112 ಪೋಸ್ಟ್ ಮಾಡಿದ ದಿನಾಂಕ:15/04/2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30/04/2025 ಕಂಪನಿಯ ಹೆಸರು: SD ಸಮತಾ ನಗರ್ ಪ್ರಾಪರ್ಟಿ ಮೆಂಟೆನೆನ್ಸ್ ಪ್ರೈವೇಟ್ ಲಿಮಿಟೆಡ್ ಕೆಲಸದ ಶೀರ್ಷಿಕೆ ಮನೆಯಿಂದ ಅತ್ಯುತ್ತಮ ಕೆಲಸ ಉದ್ಯೋಗ ಟೈಪಿಂಗ್ ಡೇಟಾ ಎಂಟಿ ಉಚಿತವಲ್ಲ ಉದ್ಯೋಗ ಒಂದು ಸಾವಿರದ ಐವತ್ತು ಈ ಪೋಟಲ್ ಅನ್ನು ಪರಿಶೀಲಿಸಲಾಗಿದೆ ಸಂಸ್ಥೆಯ ಪ್ರಕಾರ ಖಾಸಗಿ ವಲಯ ಹಣಕಾಸು ಮತ್ತು ವಿಮೆ ಕ್ರಿಯಾತ್ಮಕ ಪ್ರದೇಶ ಮಾಹಿತಿ ತಂತ್ರಜ್ಞಾನ ಕ್ರಿಯಾತ್ಮಕ ಪಾತ್ರ ಕಂಪ್ಯೂಟರ್ ಆಪರೇಟರ್ ಕೆಲಸದ ವಿವರ ಈ ಖಾಲಿ ಹುದ್ದೆಯನ್ನು ರಾಷ್ಟ್ರೀಯ ವೃತ್ತಿ ಸೇವಾ ಅಧಿಕಾರಿ ಮತ್ತು ಸಾಫ್ಟ್ರೆಕ್ಸ್ ಪ್ರಧಾನ ಮಂತ್ರಿ ಆಯುಷ್ಮಾನ್-ಭಾರತ್ (PMAY) ಯೋಜನೆಯ ಸಹಯೋಗದಲ್ಲಿ ರಚಿಸಿದ್ದಾರೆ. ಮನೆಯಿಂದ ಶಾಶ್ವತ ಕೆಲಸ ಕೆಲಸದ ಸಮಯ: ದಿನಕ್ಕೆ 4 ಗಂಟೆಗಳು, ಹೊಂದಿಕೊಳ್ಳುವ ಸಮಯ ಕೆಲಸದ ದಿನಗಳು: ಸೋಮವಾರದಿಂದ ಶುಕ್ರವಾರದವರೆಗೆ: ಮಾಸಿಕ ಆದಾಯ 23876, ಕೆಲಸದ ಪ್ರಕ್ರಿಯೆ ಮೊದಲು ನೀವು ಟೈಪಿಂಗ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು, ಇದರಲ್ಲಿ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಸಲ್ಲಿಸಬೇಕಾದ ನಂತರ ನಾವು ನಿಮ್ಮ ವೇಗವನ್ನು ಅಂದಾಜು ಮಾಡುತ್ತೇವೆ, ಅದು ಸಾಮಾನ್ಯ ದಾಖಲೆ ಆಧಾರ್ ಕಾರ್ಡ್ ಹೈಸ್ಕೂಲ್ ಮತ್ತು ಮಧ್ಯಂತರ ಮಾರ್ಕೆಟ್‌ಶೀಟ್ ಮತ್ತು ಒಂದು ಪಾಸ್‌ಪೋರ್ಟ್ ಗಾತ್ರದ ಫೋಟೋ...

ಆಹಾರವೇ ಔಷಧವಾಗಲಿ ಔಷಧ ಆಹಾರವಲ್ಲ

 ಆಹಾರವೇ  ಔಷಧವಾಗಲಿ, ಔಷಧ ಆಹಾರವಲ್ಲ ..             ಮಾಹಿತಿ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಪರಮಾಣು ಶಕ್ತಿ, ಬಾಹ್ಯಾಕಾಶ ಕ್ಷೇತ್ರ ವೈಮಾನಿಕ ಕ್ಷೇತ್ರ ಸೇರಿದಂತೆ ಪ್ರಮುಖ ರಂಗಗಳಲ್ಲಿ ಭಾರತವು ಅಮೆರಿಕ, ಬ್ರಿಟನ್, ಚೀನಾದಂಥ ಪ್ರಬಲ ರಾಷ್ಟ್ರಗಳೊಂದಿಗೆ ಸ್ಪರ್ಧೆ ಮಾಡುತ್ತಿದೆ ಎಂಬುದು ಹೆಮ್ಮೆಯ ವಿಷಯವೇ. ಆದರೆ, ಅಪೌಷ್ಟಿಕತೆ ವಿಷಯ ಬಂದಾಗ ಜಗತ್ತಿನ ಬಡ ಮತ್ತು ಸಣ್ಣ ದೇಶಗಳೊಂದಿಗೆ ಸ್ಪರ್ಧೆ ಮಾಡಬೇಕಾದ ದುಸ್ಥಿತಿ. ಆಹಾರಕ್ಕೆ ಸಂಬಂಧಿಸಿ ಭಾರತದಲ್ಲಿ ಇರುವಷ್ಟು ವೈವಿಧ್ಯಗಳು ಬೇರೆಲ್ಲಿಯೂ ಇರಲಾರವೇನೋ. ನಮ್ಮಲ್ಲಿ ಪರಸ್ಪರ ಭೇಟಿಯ ವೇಳೆ ಮೊದಲು ಕೇಳುವ ಪ್ರಶ್ನೆಯೇ 'ತಿಂಡಿ ಆಯ್ತಾ? ಊಟ ಆಯ್ತಾ?” ಎಂದು ಗೃಹಿಣಿಯರಾದರೆ, "ಏನು ಅಡುಗೆ ಮಾಡುತ್ತೀರಿ? ಇವತ್ತಿನ ವಿಶೇಷ ಏನು? ಎಂದು ವಿಚಾರಿಸುದುಂಟು. ಸಂತೋಷದ ವಿಷಯವೆಂದರೆ  ಹೊಸ ಪೀಳಿಗೆಯ ಯುವಕ ಯುವತಿಯರು ಅಡುಗೆ  ಕಲಿಯಲು ಆಸಕ್ತಿ ತೋರಿ, ಆ ನಿಟ್ಟಿನಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಬಳುವಳಿಯಾಗಿ ಬಂದಿವೆ. ಹಾಗಾಗಿಯೇ ನಮ್ಮ ಪಾಕಶಾಸ್ತ್ರ ಶ್ರೀಮಂತವಾಗಿದೆ. ಯಾವುದೇ ವಸ್ತು ತೆಗೆದುಕೊಂಡರೂ ಅದರಿಂದ ಸಿಹಿ ಪದಾರ್ಥ ಅಥವಾ ಖಾರದ ಖಾದ್ಯ ತಯಾರಿಸುವುದು ಹೇಗೆ ಎಂದು ಹಿರಿಯರು ಪಟಪಟನೆ ಹೇಳುತ್ತಾರೆ. ಋತುಮಾನಕ್ಕೆ ತಕ್ಕಂತೆ, ರುಚಿಗೆ ತಕ್ಕಂತೆ ಸ್ಥಳೀಯ ಹವಾಮಾನಕ್ಕೆ ಪೂರಕವಾಗಿ, ಕೆಲಸ/ವೃತ್ತಿಗೆ ಅನುಗುಣವಾಗಿ ಆಹಾರಪದ...

ಅಪರೂಪದ ಕಾಯಿಲೆಗಳು

          ಅಪರೂಪದ ಕಾಯಿಲೆಗಳು    ನೆಗಡಿ, ಕೆಮ್ಮು, ಜ್ವರ, ತಲೆನೋವುಗಳಂಥ ಸಾಮಾನ್ಯ ಕಾಯಿಲೆಗಳಿಲ್ಲ. ಮಧುಮೇಹ, ಹೃದ್ರೋಗ, ರಕ್ತದೊತ್ತಡ, ಕ್ಯಾನ್ಸರ್‌ಗಳಂಥ ರೋಗಗಳೂ ಅಲ್ಲ. ಅವು ಎಷ್ಟು ಅಪರೂಪ ಎಂದರೆ ಆ ಕಾಯಿಲೆಗಳ ಹೆಸರನ್ನೇ ನಾವು ಕೇಳಿರುವುದಿಲ್ಲ. ಅಷ್ಟೇ ಏಕೆ ಅವು ಬಹುತೇಕ ವೈದ್ಯರಿಗೂ ಅಪರಿಚಿತ, ತಮಗೇ ಗೊತ್ತಿರದ ಕಾಯಿಲೆಗೆ ಅದು ಹೇಗೆ ಚಿಕಿತ್ಸೆ ಕೊಟ್ಟಾರು?! ಎಲ್ಲೋ ಕೆಲವು ವೈದ್ಯರಿಗೆ ಇಂಥ ಕೆಲವು ಕಾಯಿಲೆಗಳ ಬಗ್ಗೆ ಗೊತ್ತಿರುತ್ತದೆ. ಆದರೂ ಅವುಗಳ ಚಿಕಿತ್ಸೆಗೆ ಔಷರಿಗಳು ಲಭ್ಯ ಇರುವುದಿಲ್ಲ. ಉಪಚಾರ ಇಲ್ಲದ, ಔಷಧಿಗಳಿಲ್ಲದ ಈ ಕಾಯಿಲೆಗಳು ತೀರ ಆನಾಥವೂ ಕೂಡ!       ಯಾವಾಗಲೋ ಒಮ್ಮೆ ಬರುವ ಇಂಥ ರೋಗಿಗಳ ಬಗ್ಗೆ ವೈದರೂ ತಲೆಕೆಡಿಸಿಕೊಳ್ಳುವುದಿಲ್ಲ. ಈ ಕಾಯಿಲೆಗಳಿಗೆ ನೀಡುವ ಔಷಧಿಗಳನ್ನು ಉತ್ಪಾದಿಸಲು ಔಷಧ ಉತ್ಪಾದಕರೂ ಮುಂದೆ ಬರುವುದಿಲ್ಲ. ಹಲವು ಉತ್ಪಾದಕರು  ಉತ್ಪಾದನೆಗೆ ಮುಂದಾದರೂ ಅವುಗಳ ಬೆಲೆ ತೀರಾ ಹೆಚ್ಚು. ಅವು ಸಾಮಾನ್ಯ ಜನರ ಕೈಗೆ ಎಟಕುವುದಿಲ್ಲ.  ಹೆಚ್ಚಾಗಿ ಮಕ್ಕಳನ್ನೇ ಪೀಡಿಸುವ ಈ ಕಾಯಿಲೆಗಳು ಅವರನ್ನು ಎಳೆ ವಯಸ್ಸಿನಲ್ಲಿಯೇ ಅರ್ಜರಿತರನ್ನಾಗಿಸುತ್ತವೆ. ಸರಿಸುಮಾರು ಹತ್ತು ಕಿಲೋ ಭಾರದ ಒಂದು ಮಗುವಿಗೆ. ಪ್ರತಿವರ್ಷ ಎಷ್ಟೋ ಲಕ್ಷದಿಂದ ನಿಂದ ಒಂದು ಕೋಟಿಗೂ ಹೆಚ್ಚು ಹಣವನ್ನು ಚಿಕಿತ್ಸೆಗಾಗಿ ತೆರಬೇಕಾಗುತ್ತದೆ. ಸರಕಾರ, ಸ್ವಯಂಸೇವಾ ಸಂಸ್ಥೆ...