Skip to main content

                ವೃದ್ಧೆಯ ಜಾಣತನ


ನ್ಯಾಯ, ನೀತಿ, ದಾನ, ಧರ್ಮಗಳನ್ನು ತಿಳಿದು ಪಾಲಿಸುತ್ತಿದ್ದ  ಒಬ್ಬ ಮಹಾರಾಜನಿದ್ದನು. ಒಂದು ಸಲ ಒಂದು ದೊಡ್ಡ ಪ್ರದರ್ಶನವನ್ನು ಏರ್ಪಾಟು ಮಾಡಿದ.ಆ  ಪ್ರದರ್ಶನದಲ್ಲಿ ಹಲವಾರು ವಸ್ತುಗಳು ಇದ್ದವು. ಬೆಲೆಬಾಳುವ  ಬಟ್ಟೆಗಳು ಅಪರೂಪದ ಒಡವೆ,ವಸ್ತುಗಳು ಇದ್ದವು. ಪ್ರದರ್ಶನದಲ್ಲಿಟ್ಟ ವಸ್ತುಗಳನ್ನು ನೋಡಲು ಬಂದವರು, ತಮಗೆ ಯಾವ ವಸ್ತು ಬೇಕೋ ಅದನ್ನು  ತೆಗೆದುಕೊಂಡು ಹೋಗಬಹುದಿತ್ತು. ಇದರಿಂದ ಸುತ್ತಮುತ್ತಲ ಹಳ್ಳಿ, ಪಟ್ಟಣ ಹಾಗೂ ನಗರದ ಜನರು ಬಂದರು. ಪ್ರದರ್ಶನ ನೋಡಲು ಬಂದವರೆಲ್ಲ ನೋಡು ನೋಡುತ್ತಾ ತಮಗೆ ಬೇಕಾದ ಬೆಲೆಬಾಳುವ ಬಟ್ಟೆಗಳನ್ನು, ಇನ್ನು ಕೆಲವರು ಒಡವೆಗಳನ್ನು, ಮತ್ತೆ ಕೆಲವರು ಅದ್ಭುತವಾದ ಪುಸ್ತಕಗಳನ್ನು, ಇನ್ನಷ್ಟು ಜನ ಹಣ್ಣುಹಂಪಲುಗಳನ್ನು, ಹೇಗೆ ತಮಗೆ ಬೇಕು ಬೇಕಾದಂತಹ ವಸ್ತುಗಳನ್ನು ತೆಗೆದುಕೊಂಡು ಹೋದರು 


ಅಲ್ಲಿಗೆ ಬಂದವರೆಲ್ಲಾ ತಮಗೆ ಏನು ಬೇಕೋ ಅದನ್ನು ತೆಗೆದುಕೊಂಡು ಹೋದರು. ಆದರೆ ಅಲ್ಲಿಗೆ ಬಂದವರಲ್ಲಿ , ವೃದ್ಧಳಾದ ಮಹಿಳೆಯೂಬ್ಬಳು

ಅಲ್ಲಿರುವ ಯಾವ ವಸ್ತುವನ್ನು ಮುಟ್ಟಲಿಲ್ಲ. ಅವಳಿಗೆ ಯಾವುದೂ ತೃಪ್ತಿ ಕಂಡಂತೆ ಅನಿಸಲಿಲ್ಲ. ಇದನ್ನೇ ಗಮನಿಸುತ್ತಿದ್ದ ದಿವಾನನು, ರಾಜನ್,

"ಈ ಪಟ್ಟಣದ ಜನರೆಲ್ಲರೂ ಈ ಪ್ರದರ್ಶನವನ್ನು ನೋಡಿ ಆನಂದಿಸಿ ಅದರಲ್ಲಿನ ಎಲ್ಲಾ ವಸ್ತುಗಳನ್ನು ನೋಡಿ ಕಣ್ತುಂಬಿಕೊಂಡು ತಮಗೆ ಬೇಕಾದುದನ್ನು ತೆಗೆದುಕೊಂಡು ಸಂತೋಷಗೊಂಡರು. ಆದರೆ ಒಬ್ಬ ಮಹಿಳೆ ಇದ್ಯಾವುದರಿಂದಲೂ ಅವಳಿಗೆ ತೃಪ್ತಿಯಾಗಿಲ್ಲ. ಇಲ್ಲಿರುವ ಯಾವ ವಸ್ತುಗಳು  ಅವಳಿಗೆ ಬೇಡವಂತೆ. ಆಕೆಗೆ ರಾಜನೊಡನೆ ಮಾತನಾಡುವುದು ಇದೆಯಂತೆ" ಎಂದನು. 


ಈ ಮಾತುಗಳನ್ನು ಆಲಿಸಿದ ರಾಜನು ಆಕೆಯನ್ನು ಕಾಣಲು  ಸ್ವತಹ  ಆನೆಯ ಮೇಲೆ ಕುಳಿತು  ಹೊರಟನು. ವೃದ್ಧ ಮಹಿಳೆಯನ್ನು ಕಂಡೊಡನೆ ಆಕೆಯು, "ಪೂಜ್ಯನಾದ ದೊರೆಯೇ, ಆನೆಯಿಂದ ಕೆಳಗಿಳಿದು ಬಾ ನಾನು ನಿನ್ನೊಡನೆ ಒಂದು ಬಹು ಮುಖ್ಯವಾದ ವಿಷಯವನ್ನು ಮಾತನಾಡಬೇಕಾಗಿದೆ" ಆಕೆಯ ಮಾತಿನಂತೆ ರಾಜನು ಕೆಳಗಿಳಿದನು. ಆಕೆಯು ರಾಜನ ಬಲಗೈಯ್ಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು," ಓ ರಾಜನೆ, ಈಗ ನೀನು ನನ್ನವನು. ರಾಜ ಭಂಡಾರದಲ್ಲಿರುವ ಸಣ್ಣಪುಟ್ಟ ವಸ್ತುಗಳು, ಬೆಲೆಬಾಳುವ ವಸ್ತುಗಳು, ಒಡವೆ, ಆಭರಣಗಳು, ವಸ್ತ್ರಗಳು,ಆಟದ ಸಾಮಾನುಗಳು ನನಗೆ ಇವಾವುದು ಬೇಡ. ಈ ದಿನ ನೀನು ನನ್ನ  ವಶದಲ್ಲಿರುವೆ, ನೀನು ನನ್ನವನಾದುದರಿಂದ  ಇಡೀ ರಾಜ್ಯದ ಸಂಪತ್ತೆಲ್ಲ ನನ್ನದಾಯಿತು". ವೃದ್ಧಯ ಜಾಣತನದ ಮಾತುಗಳನ್ನು ಕೇಳಿ ರಾಜನು ದಂಗುಬಡಿದನು. ರಾಜನು, ಆಕೆಯ ಮಾತುಗಳನ್ನು ಮೆಚ್ಚಿ ಆಕೆಯನ್ನು ತನ್ನ ಅರಮನೆಗೆ ಕರೆದುಕೊಂಡು ಹೋದನು. ಆಕೆಯ ಯೋಗಕ್ಷೇಮವನ್ನು ತಾನೇ ನೋಡಿಕೊಂಡು,ಅವನ ಜೀವಿತಾವಧಿಯವರೆಗೂ ರಾಜನು ತನ್ನ ಜೊತೆಗೆ ಅವಳನ್ನು ಇರಿಸಿಕೊಂಡು ತಾಯಿಯನ್ನು ನೋಡಿಕೊಳ್ಳುವಂತೆ ಪ್ರೀತಿಯಿಂದ ನೋಡಿಕೊಂಡನು. 


ಪ್ರಾಪಂಚಿಕ ಇಚ್ಛೆಗಳನ್ನು ಬಯಸಿದಷ್ಟು ಅವುಗಳ ಗುಲಾಮರಾಗುತ್ತೇವೆ.

ಮನದ  ಕಾಮನೆಗಳನ್ನೆಲ್ಲಾ ದೂರ ಮಾಡಿ, ಜಗದ್ರಕ್ಷಕನಾದ ಪರಮಾತ್ಮನಲ್ಲೇ

ನಮ್ಮನ್ನು ಕಂಡುಕೊಂಡರೆ, ಯಾವ ಅಪೇಕ್ಷೆಗಳು ನಮ್ಮನ್ನು ಕಾಡುವುದಿಲ್ಲ.

ವೃದ್ಧ ಮಹಿಳೆಯು, ರಾಜನನ್ನು ತನ್ನ ಒಡೆಯನೆಂದು ಪಡೆದು, ಇಡೀ ರಾಜ್ಯಕ್ಕೆ ತಾನೆ ಒಡೆಯಳಾದಳು. ಈ ರೀತಿಯಾಗಿ ದ್ಯಾನ ಭಕ್ತಿ , ಭಜನೆ ಮಾಡುವುದರ

ಮೂಲಕ ಭಗವಂತನನ್ನು ಪಡೆದರೆ, ಪ್ರಪಂಚದಲ್ಲಿರುವ ಸಕಲಕ್ಕೂ ನಾವೇ ಒಡೆಯರು ಆಗುತ್ತೇವೆ. 


"ಸ ಏವಾಯಂ ಮಯಾ ತೇದ್ಯ, ಯೋಗ ಹ. ಪ್ರೋಕ್ತಹ ಪುರಾತನಹ!

ಭಕ್ತೋಸಿ. ಮೇ ಸಖಾ ಚೇತಿ ರಹಸ್ಯಂ ಹ್ಯೇತದುತತ್ತಮಂ " 


.

Comments

Popular posts from this blog

ಮನೆಯಿಂದಲೆ ಮಾಡಿ ಕೆಲಸ

 ಉದ್ಯೋಗ ಐಡಿ:20W70-1452100405437J ಸಂಬಳ:(₹) 22500 - 26500 (ಮಾಸಿಕ) ಹುದ್ದೆಗಳ ಸಂಖ್ಯೆ: 112 ಪೋಸ್ಟ್ ಮಾಡಿದ ದಿನಾಂಕ:15/04/2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:30/04/2025 ಕಂಪನಿಯ ಹೆಸರು: SD ಸಮತಾ ನಗರ್ ಪ್ರಾಪರ್ಟಿ ಮೆಂಟೆನೆನ್ಸ್ ಪ್ರೈವೇಟ್ ಲಿಮಿಟೆಡ್ ಕೆಲಸದ ಶೀರ್ಷಿಕೆ ಮನೆಯಿಂದ ಅತ್ಯುತ್ತಮ ಕೆಲಸ ಉದ್ಯೋಗ ಟೈಪಿಂಗ್ ಡೇಟಾ ಎಂಟಿ ಉಚಿತವಲ್ಲ ಉದ್ಯೋಗ ಒಂದು ಸಾವಿರದ ಐವತ್ತು ಈ ಪೋಟಲ್ ಅನ್ನು ಪರಿಶೀಲಿಸಲಾಗಿದೆ ಸಂಸ್ಥೆಯ ಪ್ರಕಾರ ಖಾಸಗಿ ವಲಯ ಹಣಕಾಸು ಮತ್ತು ವಿಮೆ ಕ್ರಿಯಾತ್ಮಕ ಪ್ರದೇಶ ಮಾಹಿತಿ ತಂತ್ರಜ್ಞಾನ ಕ್ರಿಯಾತ್ಮಕ ಪಾತ್ರ ಕಂಪ್ಯೂಟರ್ ಆಪರೇಟರ್ ಕೆಲಸದ ವಿವರ ಈ ಖಾಲಿ ಹುದ್ದೆಯನ್ನು ರಾಷ್ಟ್ರೀಯ ವೃತ್ತಿ ಸೇವಾ ಅಧಿಕಾರಿ ಮತ್ತು ಸಾಫ್ಟ್ರೆಕ್ಸ್ ಪ್ರಧಾನ ಮಂತ್ರಿ ಆಯುಷ್ಮಾನ್-ಭಾರತ್ (PMAY) ಯೋಜನೆಯ ಸಹಯೋಗದಲ್ಲಿ ರಚಿಸಿದ್ದಾರೆ. ಮನೆಯಿಂದ ಶಾಶ್ವತ ಕೆಲಸ ಕೆಲಸದ ಸಮಯ: ದಿನಕ್ಕೆ 4 ಗಂಟೆಗಳು, ಹೊಂದಿಕೊಳ್ಳುವ ಸಮಯ ಕೆಲಸದ ದಿನಗಳು: ಸೋಮವಾರದಿಂದ ಶುಕ್ರವಾರದವರೆಗೆ: ಮಾಸಿಕ ಆದಾಯ 23876, ಕೆಲಸದ ಪ್ರಕ್ರಿಯೆ ಮೊದಲು ನೀವು ಟೈಪಿಂಗ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು, ಇದರಲ್ಲಿ ಅಭ್ಯರ್ಥಿಗಳು ತಮ್ಮ ದಾಖಲೆಗಳನ್ನು ಸಲ್ಲಿಸಬೇಕಾದ ನಂತರ ನಾವು ನಿಮ್ಮ ವೇಗವನ್ನು ಅಂದಾಜು ಮಾಡುತ್ತೇವೆ, ಅದು ಸಾಮಾನ್ಯ ದಾಖಲೆ ಆಧಾರ್ ಕಾರ್ಡ್ ಹೈಸ್ಕೂಲ್ ಮತ್ತು ಮಧ್ಯಂತರ ಮಾರ್ಕೆಟ್‌ಶೀಟ್ ಮತ್ತು ಒಂದು ಪಾಸ್‌ಪೋರ್ಟ್ ಗಾತ್ರದ ಫೋಟೋ...

ಆಹಾರವೇ ಔಷಧವಾಗಲಿ ಔಷಧ ಆಹಾರವಲ್ಲ

 ಆಹಾರವೇ  ಔಷಧವಾಗಲಿ, ಔಷಧ ಆಹಾರವಲ್ಲ ..             ಮಾಹಿತಿ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಪರಮಾಣು ಶಕ್ತಿ, ಬಾಹ್ಯಾಕಾಶ ಕ್ಷೇತ್ರ ವೈಮಾನಿಕ ಕ್ಷೇತ್ರ ಸೇರಿದಂತೆ ಪ್ರಮುಖ ರಂಗಗಳಲ್ಲಿ ಭಾರತವು ಅಮೆರಿಕ, ಬ್ರಿಟನ್, ಚೀನಾದಂಥ ಪ್ರಬಲ ರಾಷ್ಟ್ರಗಳೊಂದಿಗೆ ಸ್ಪರ್ಧೆ ಮಾಡುತ್ತಿದೆ ಎಂಬುದು ಹೆಮ್ಮೆಯ ವಿಷಯವೇ. ಆದರೆ, ಅಪೌಷ್ಟಿಕತೆ ವಿಷಯ ಬಂದಾಗ ಜಗತ್ತಿನ ಬಡ ಮತ್ತು ಸಣ್ಣ ದೇಶಗಳೊಂದಿಗೆ ಸ್ಪರ್ಧೆ ಮಾಡಬೇಕಾದ ದುಸ್ಥಿತಿ. ಆಹಾರಕ್ಕೆ ಸಂಬಂಧಿಸಿ ಭಾರತದಲ್ಲಿ ಇರುವಷ್ಟು ವೈವಿಧ್ಯಗಳು ಬೇರೆಲ್ಲಿಯೂ ಇರಲಾರವೇನೋ. ನಮ್ಮಲ್ಲಿ ಪರಸ್ಪರ ಭೇಟಿಯ ವೇಳೆ ಮೊದಲು ಕೇಳುವ ಪ್ರಶ್ನೆಯೇ 'ತಿಂಡಿ ಆಯ್ತಾ? ಊಟ ಆಯ್ತಾ?” ಎಂದು ಗೃಹಿಣಿಯರಾದರೆ, "ಏನು ಅಡುಗೆ ಮಾಡುತ್ತೀರಿ? ಇವತ್ತಿನ ವಿಶೇಷ ಏನು? ಎಂದು ವಿಚಾರಿಸುದುಂಟು. ಸಂತೋಷದ ವಿಷಯವೆಂದರೆ  ಹೊಸ ಪೀಳಿಗೆಯ ಯುವಕ ಯುವತಿಯರು ಅಡುಗೆ  ಕಲಿಯಲು ಆಸಕ್ತಿ ತೋರಿ, ಆ ನಿಟ್ಟಿನಲ್ಲಿ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಬಳುವಳಿಯಾಗಿ ಬಂದಿವೆ. ಹಾಗಾಗಿಯೇ ನಮ್ಮ ಪಾಕಶಾಸ್ತ್ರ ಶ್ರೀಮಂತವಾಗಿದೆ. ಯಾವುದೇ ವಸ್ತು ತೆಗೆದುಕೊಂಡರೂ ಅದರಿಂದ ಸಿಹಿ ಪದಾರ್ಥ ಅಥವಾ ಖಾರದ ಖಾದ್ಯ ತಯಾರಿಸುವುದು ಹೇಗೆ ಎಂದು ಹಿರಿಯರು ಪಟಪಟನೆ ಹೇಳುತ್ತಾರೆ. ಋತುಮಾನಕ್ಕೆ ತಕ್ಕಂತೆ, ರುಚಿಗೆ ತಕ್ಕಂತೆ ಸ್ಥಳೀಯ ಹವಾಮಾನಕ್ಕೆ ಪೂರಕವಾಗಿ, ಕೆಲಸ/ವೃತ್ತಿಗೆ ಅನುಗುಣವಾಗಿ ಆಹಾರಪದ...

ಅಪರೂಪದ ಕಾಯಿಲೆಗಳು

          ಅಪರೂಪದ ಕಾಯಿಲೆಗಳು    ನೆಗಡಿ, ಕೆಮ್ಮು, ಜ್ವರ, ತಲೆನೋವುಗಳಂಥ ಸಾಮಾನ್ಯ ಕಾಯಿಲೆಗಳಿಲ್ಲ. ಮಧುಮೇಹ, ಹೃದ್ರೋಗ, ರಕ್ತದೊತ್ತಡ, ಕ್ಯಾನ್ಸರ್‌ಗಳಂಥ ರೋಗಗಳೂ ಅಲ್ಲ. ಅವು ಎಷ್ಟು ಅಪರೂಪ ಎಂದರೆ ಆ ಕಾಯಿಲೆಗಳ ಹೆಸರನ್ನೇ ನಾವು ಕೇಳಿರುವುದಿಲ್ಲ. ಅಷ್ಟೇ ಏಕೆ ಅವು ಬಹುತೇಕ ವೈದ್ಯರಿಗೂ ಅಪರಿಚಿತ, ತಮಗೇ ಗೊತ್ತಿರದ ಕಾಯಿಲೆಗೆ ಅದು ಹೇಗೆ ಚಿಕಿತ್ಸೆ ಕೊಟ್ಟಾರು?! ಎಲ್ಲೋ ಕೆಲವು ವೈದ್ಯರಿಗೆ ಇಂಥ ಕೆಲವು ಕಾಯಿಲೆಗಳ ಬಗ್ಗೆ ಗೊತ್ತಿರುತ್ತದೆ. ಆದರೂ ಅವುಗಳ ಚಿಕಿತ್ಸೆಗೆ ಔಷರಿಗಳು ಲಭ್ಯ ಇರುವುದಿಲ್ಲ. ಉಪಚಾರ ಇಲ್ಲದ, ಔಷಧಿಗಳಿಲ್ಲದ ಈ ಕಾಯಿಲೆಗಳು ತೀರ ಆನಾಥವೂ ಕೂಡ!       ಯಾವಾಗಲೋ ಒಮ್ಮೆ ಬರುವ ಇಂಥ ರೋಗಿಗಳ ಬಗ್ಗೆ ವೈದರೂ ತಲೆಕೆಡಿಸಿಕೊಳ್ಳುವುದಿಲ್ಲ. ಈ ಕಾಯಿಲೆಗಳಿಗೆ ನೀಡುವ ಔಷಧಿಗಳನ್ನು ಉತ್ಪಾದಿಸಲು ಔಷಧ ಉತ್ಪಾದಕರೂ ಮುಂದೆ ಬರುವುದಿಲ್ಲ. ಹಲವು ಉತ್ಪಾದಕರು  ಉತ್ಪಾದನೆಗೆ ಮುಂದಾದರೂ ಅವುಗಳ ಬೆಲೆ ತೀರಾ ಹೆಚ್ಚು. ಅವು ಸಾಮಾನ್ಯ ಜನರ ಕೈಗೆ ಎಟಕುವುದಿಲ್ಲ.  ಹೆಚ್ಚಾಗಿ ಮಕ್ಕಳನ್ನೇ ಪೀಡಿಸುವ ಈ ಕಾಯಿಲೆಗಳು ಅವರನ್ನು ಎಳೆ ವಯಸ್ಸಿನಲ್ಲಿಯೇ ಅರ್ಜರಿತರನ್ನಾಗಿಸುತ್ತವೆ. ಸರಿಸುಮಾರು ಹತ್ತು ಕಿಲೋ ಭಾರದ ಒಂದು ಮಗುವಿಗೆ. ಪ್ರತಿವರ್ಷ ಎಷ್ಟೋ ಲಕ್ಷದಿಂದ ನಿಂದ ಒಂದು ಕೋಟಿಗೂ ಹೆಚ್ಚು ಹಣವನ್ನು ಚಿಕಿತ್ಸೆಗಾಗಿ ತೆರಬೇಕಾಗುತ್ತದೆ. ಸರಕಾರ, ಸ್ವಯಂಸೇವಾ ಸಂಸ್ಥೆ...